September 20, 2024

ಅಕ್ರಮ ಕಸಾಯಿಖಾನೆ ಅಡ್ಡೆಗೆ ಪೊಲೀಸರ ದಾಳಿ: ಮಾಂಸ ಮತ್ತು ಮೂವರು ಆರೋಪಿಗಳು ವಶಕ್ಕೆ

0

ಶಿರ್ವ: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಬೆಳಪು ಗ್ರಾಮದ ಹಾಜಿಗೇಟ್‌ ಬಳಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಸಾಯಿಖಾನೆ ಅಡ್ಡೆಗೆ ಶಿರ್ವ ಪೊಲೀಸ್‌ ಠಾಣಾಧಿಕಾರಿ ರಾಘವೇಂದ್ರ ಸಿ. ಮತ್ತು ಕ್ರೈಂ ಎಸ್‌ಐ ಸುರೇಶ್‌ ಜೆ.ಕೆ. ನೇತೃತ್ವದ ತಂಡ ಇಂದು ಮುಂಜಾನೆ ದಾಳಿ ನಡೆಸಿ ಗೋಮಾಂಸ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ತಬ್ರೇಸ್‌, ಮಹಮ್ಮದ್‌ ಹಾಜಿಂ ಮತ್ತು ಮಹಮ್ಮದ್‌ ವಲೀದ್‌ ಬಂಧಿತರು ಎಂದು ತಿಳಿದುಬಂದಿದೆ.

ಅಕ್ರಮ ಕಸಾಯಿಖಾನೆಯಲ್ಲಿ ಗೋಮಾಂಸ ಮಾಡಲು ಉಪಯೋಗಿಸಿದ್ದ ಕತ್ತಿ ಮತ್ತಿತರ ಪರಿಕರಗಳು ಗೋಮಾಂಸ ಮತ್ತು 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಒಂದು ಗಂಡು ಕರುವನ್ನು ರಕ್ಷಿಸಿದ್ದಾರೆ.

ಇನ್ನು ಘಟನೆಯ ಕುರಿತು ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!