March 19, 2026

ಕುಂದಾಪುರ: ಮರವಂತೆ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನದ ಕಳವು ಪ್ರಕರಣ, ಆರೋಪಿ ಕರುಣಾಕರ್ ದೇವಾಡಿಗನಿಗೆ ಜಾಮೀನು

0
image_editor_output_image-1909001066-1662787668762.jpg

ಕುಂದಾಪುರ: ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನದ ಕಳವು ಪ್ರಕರಣಗಳ ಆರೋಪಿ ಕರುಣಾಕರ್ ದೇವಾಡಿಗ ನಿಗೆ ನಗರದ ಪ್ರಧಾನ ಸಿವಿಲ್ ಮತ್ತು ಪ್ರಥಮ ದರ್ಜೆ ದಂಡಾಧಿಕಾರಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಮರವಂತೆಯಲ್ಲಿ ಆರೋಪಿಗಳು ಕುಡುಗೋಲಿನಿಂದ ದೇಗುಲದ ಬೀಗ ಒಡೆದು ಒಳ ಹೋಗುತ್ತಿರುವುದು ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕರುಣಾಕರ ದೇವಾಡಿಗ ಬಂಧನದ ನಂತರ ಬೇರೆ ದೇವಸ್ಥಾನಗಳಿಂದಲೂ ವಸ್ತುಗಳನ್ನು ಕದ್ದಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು.

ಆರೋಪಿಗಳ ಪರ ವಕೀಲರಾದ ಕೆ.ಎಂ.ಇಲ್ಯಾಸ್ ಹಾಗೂ ಮುಳ್ಳಿಕಟ್ಟೆ ಚರಣರಾಜ್ ಮೆಂಡನ್ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!