December 19, 2025

ಸುಳ್ಯ: ಕಟ್ಟಡದಿಂದ ಬಿದ್ದು ಯುವಕ ಮೃತ್ಯು

0
IMG-20211106-WA0032.jpg

ಸುಳ್ಯ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ವಿವಿಧ ಘಟನೆಗಳು ಸಂಭವಿಸಿ ಸಾವು ನೋವಿನ ಸಂಖ್ಯೆ ಹೆಚ್ಚಾಗಿ ಕಂಡು ಬಂದಿದೆ. ನಿನ್ನೆ ಸುಳ್ಯದ ಗಾಂಧಿನಗರ ಕ್ಯಾಶ್ಯೂ ಫ್ಯಾಕ್ಟರಿ ಬಳಿ ಗುಜರಿ ವ್ಯಾಪಾರಸ್ಥರೋರ್ವರು ಗೋಡೆ ಕುಸಿದು ಮೃತರಾದ ಘಟನೆ ಮಾಸುವ ಮುನ್ನವೇ ಇಂದು ಬಾಳಿಲ ಸಮೀಪ ಹೊಸ ಕಟ್ಟಡ ನಿರ್ಮಾಣದ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಮಧ್ಯ ಪ್ರದೇಶ ಮೂಲದ ಮಹೇಶ್ ಸಿಂಗ್ ಎಂಬುವವರು ಹಳೆಯ ಕಟ್ಟಡದ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದು ಮೃತರಾದ ಘಟನೆ ಇದೀಗ ವರದಿಯಾಗಿದೆ.

ಅದೇ ರೀತಿ ನಿನ್ನೆ ದೇವಚಳ್ಳ ಗ್ರಾಮದ ಯುವಕ ನದಿಯಲ್ಲಿ ಮೀನು ಹಿಡಿಯಲು ಹೋಗಿ ಬ್ಯಾಟರಿ ಬಳಸಿ ಮೀನು ಹಿಡಿಯುವ ಸಂದರ್ಭ ಕರೆಂಟ್ ಶಾಕಿನಿಂದ ಮೃತಪಟ್ಟರೆ, ಇಂದು ಸಂಜೆ ಬೆಳ್ಳಾರೆ ಸಮೀಪ ಮತ್ತೋರ್ವ ಪುತ್ತೂರಿನ ಯುವಕ ಕೆರೆಯಲ್ಲಿ ಮುಳುಗಿ ಮೃತರಾದ ಘಟನೆ ವರದಿಯಾಗಿದೆ.

ಕಳೆದ ಹಲವಾರು ದಿನಗಳಿಂದ ಸಂಜೆ ಸಮಯದಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ತತ್ತರಿಸಿದೆ. ನದಿಯ ನೀರು ಹಳ್ಳ-ಕೊಳ್ಳಗಳು ತುಂಬಿ ಅಪಾಯದ ಸ್ಥಿತಿಯಲ್ಲಿದೆ. ಆದ್ದರಿಂದ ಸಾರ್ವಜನಿಕರು ಸ್ವತಹ ಜಾಗರೂಕರಾಗಿ ಮಕ್ಕಳನ್ನು ನದಿ ಮತ್ತು ಹಳ್ಳ-ಕೊಳ್ಳಗಳ ಕಡೆ ಹೋಗದಂತೆ ಎಚ್ಚರಿಕೆ ವಹಿಸಬೇಕಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!