February 2, 2026

ಜಲಾಶಯದಲ್ಲಿ ಸೆಲ್ಫಿ ತೆಗೆಯುತ್ತಿದ್ದಾಗ ಆಯತಪ್ಪಿ ಬಿದ್ದು ಯುವಕ ಮೃತ್ಯು

0
image_editor_output_image-755095711-1658125556229.jpg

ಹುಬ್ಬಳ್ಳಿ: ನೀರಸಾಗರ ಜಲಾಶಯದಲ್ಲಿ ಭಾನುವಾರ ಸಂಜೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ 22 ವರ್ಷದ ಯುವಕನೊಬ್ಬ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

ಮಳೆ, ಪ್ರವಾಹ ಹಾಗೂ ಕತ್ತಲು ಕೂಡಾ ಆಗಿದ್ದರಿಂದ  ಶೋಧ ಕಾರ್ಯಾಚರಣೆ ಸ್ಥಗಿತಗೊಂಡಿದೆ.  ಕಲಘಟಗಿ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿ ಶಾಮಕ ಸಿಬ್ಬಂದಿ ಇಂದು ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಲಿದ್ದಾರೆ. 

ಧಾರವಾಡ ಜಿಲ್ಲೆ ಬೇಗೂರು ಗ್ರಾಮದ ನಿವಾಸಿ ಕಿರಣ್ ರಾಜ್ ಪುರ ನೀರಿನಲ್ಲಿ ಹೊಚ್ಚಿನಿಂದ ಯುವಕನಾಗಿದ್ದಾನೆ. ತನ್ನ ಸ್ನೇಹಿತರೊಂದಿಗೆ ಜಲಾಶಯದ ಬಳಿ ಬಂದಿದ್ದ ಈತ ಸೆಲ್ಫಿ ತೆಗೆದುಕೊಳ್ಳಲು ತುದಿಗೆ ಹೋದಾಗ ಹರಿಯುವ ನೀರಿನಲ್ಲಿ ಜಾರಿ ಬಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆತ ನೀರಿನಲ್ಲಿ ಕೋಚಿಕೊಂಡು ಹೋಗಿದ್ದು, ಪತ್ತೆ ಹಚ್ಚಲು ಅವನ ಸ್ನೇಹಿತರು ಮಾಡಿದ ಪ್ರಯತ್ನಗಳು ವ್ಯರ್ಥವಾಯಿತು.

Leave a Reply

Your email address will not be published. Required fields are marked *

error: Content is protected !!