September 20, 2024

ಉಜಿರೆ: ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

0

ಬೆಳ್ತಂಗಡಿ: ಉಜಿರೆಯ ನಾಗರಾಜ ಕಾಂಪೌಂಡ್ ಎಂಬುವರ ಬಾವಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ.

ಜಮೀನಿನ ಮಾಲೀಕರು ಮೈಸೂರಿನಲ್ಲಿ ನೆಲೆಸಿದ್ದು, ಅವರು ಒಂದು ವಾರದ ಹಿಂದೆ ಜಮೀನಿಗೆ ಬಂದಿದ್ದು, ಬಾವಿಯಲ್ಲಿ ತಲೆ ತೇಲುತ್ತಿರುವುದನ್ನು ಕಂಡು ತೆಂಗಿನಕಾಯಿಯೇ ಇರಬೇಕು ಎಂದುಕೊಂಡರು.

ಇನ್ನು ಜೂನ್ 19 ರ ಭಾನುವಾರದಂದು ಮತ್ತೊಮ್ಮೆ ಭೇಟಿ ನೀಡಿದ ವೇಳೆ ಅವರ ಮನೆಯ ಸುತ್ತಮುತ್ತ ವಾಸನೆ ಬಂದಿದ್ದು, ಬಾವಿಯನ್ನು ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.

ಸ್ಥಳೀಯರ ನೆರವಿನಿಂದ ಮೃತದೇಹವನ್ನು ಮೇಲೆತ್ತಲಾಗಿದ್ದು, ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!