September 20, 2024

ಬೆಳ್ತಂಗಡಿ: ಮಂಟಪದಲ್ಲಿ ಹಾರ ಹಾಕುವಾಗ ವರ ಕೈ ತಾಗಿಸಿದನೆಂದು ಆರೋಪಿಸಿ ಹಾರವನ್ನೇ ಎಸೆದ ವಧು: ಮದುವೆ ರದ್ದು

0

ಬೆಳ್ತಂಗಡಿ: ಅದ್ದೂರಿಯಾಗಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದರಲ್ಲಿ ವರ ಹಾರ ಹಾಕುವಾಗ ಕೈ ತಾಗಿಸಿದನೆಂದು ವಧು ಹಾರವನ್ನೇ ಎಸೆದು ಮದುವೆ ಮುರಿದು ಬಿದ್ದ ಘಟನೆ ನಾರಾವಿಯಲ್ಲಿ ನಡೆದಿದೆ.

ಮಧುಮಗ ವಧುವಿನ ಕುತ್ತಿಗೆಗೆ ಇನ್ನೇನು ಹಾರ ಹಾಕಬೇಕಿತ್ತು. ಅದರಂತೆ ಆತ ಹಾರ ಹಾಕುತ್ತಿದ್ದ ಆಗ ಜಗಳ ಶುರುವಾಗಿತ್ತು. ವರ ಹಾರ ಹಾಕುವಾಗ ವರ ಕೈ ತಾಗಿಸಿದ ಎನ್ನುತ್ತಾ ವಧು ತಗಾದೆ ತೆಗೆದಿದ್ದಾಳೆ.

ವರ ಹಾರ ಹಾಕುವಾಗ ವಧುವಿನ ಕೊರಳಿಗೆ ಮತ್ತು ಕಿವಿಗೆ ವರನ ಕೈ ತಾಗಿರುವುದಕ್ಕೆ ವಧು ಸಿಟ್ಟಾಗಿದ್ದು, ತದನಂತರ ಮಾತುಕತೆಯ ಬಳಿಕ ಕಾರ್ಯಕ್ರಮ ಮುಂದುವರೆಯಿತಾದರೂ ಇನ್ನೇನು ಮುಹೂರ್ತದ ಸಮಯ ಕೂಡಿಬಂದಾಗ ವರನು ಇನ್ನೇನು ತಾಳಿ ಕಟ್ಟಬೇಕು ಎಂದು ಮುಂದಾದಾಗ ವಧು ತಾಳಿಯ ಸಹಿತ ಹೂವಿನ ಹಾರವನ್ನು ಎಸೆದು ಮದುವೆ ಬೇಡವೆಂದಿದ್ದಾಳೆ.

ಈ ಘಟನೆ ವರ ಆಶ್ಚರ್ಯಗೊಂಡು ಸಮಾರಂಭದಲ್ಲೇ ಹೆಣ್ಣು ಗಂಡಿನ ಕುಟುಂಬಗಳೆರಡು ಮಾತಿಗೆ ಮಾತು ಬೆಳೆದುಕೊಂಡಿದ್ದು, ಸಣ್ಣ ಮಟ್ಟಿನ ಜಗಳ ಪ್ರಾರಂಭವಾಗಿದ್ದು, ಈ ವೇಳೆ ವೇಣೂರು ಪೊಲೀಸರ ಆಗಮನವಾಗಿದೆ. ಬಳಿಕ ಪೊಲೀಸರ ಸಮ್ಮುಖದಲ್ಲಿ ಮಾತುಕತೆ ನಡೆದಿದ್ದು ವಧು ಗಂಭೀರ ಆರೋಪ ಮಾಡಿದ್ದಾಳೆ.

ಮದುವೆ ನಿಶ್ಚಯ ಕಾರ್ಯಕ್ರಮಕ್ಕೆ ಬಂದ ವರ ಬೇರೆ, ಹೆಣ್ಣು ನೋಡಲು ಬಂದ ವರ ಬೇರೆ ಈಗ ಮದುವೆಯಾಗುತ್ತಿರುವ ವರ ಬೇರೆಯವನೇ ಎಂದು ಅಚ್ಚರಿಯ ಮಾತನ್ನು ತಿಳಿಸಿದ್ದಾರೆ ಇದರಿಂದ ಪ್ರಕರಣ ತಿರುವು ಪಡೆದುಕೊಂಡಿದೆ.

Leave a Reply

Your email address will not be published. Required fields are marked *

error: Content is protected !!