December 15, 2025

ಸುಳ್ಯ: ಬಸ್‌ಗೆ ದ್ವಿಚಕ್ರ ವಾಹನ ಢಿಕ್ಕಿ; ಸವಾರನಿಗೆ ಗಾಯ

0
image_editor_output_image1175785315-1653558959922.jpg

ಸುಳ್ಯ: ಬೈಕೊಂದು ಕೆಎಸ್ಸಾರ್ಟಿಸಿ ಗೂಡ್ಸ್‌ ಬಸ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಗಾಯಗೊಂಡ ಘಟನೆ ಕನಕಮಜಲಿನ ಆನೆಗುಂಡಿಯಲ್ಲಿ ಗುರುವಾರ ನಡೆದಿದೆ.

ಮಡಿಕೇರಿಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಗೂಡ್ಸ್‌ ಬಸ್‌ನ ಮುಂಭಾಗಕ್ಕೆ ಪಂಜದ ಯುವಕನ ಬೈಕ್‌ ಆನೆಗುಂಡಿ ತಿರುವಿನಲ್ಲಿ ಢಿಕ್ಕಿ ಹೊಡೆದಿದೆ. ಬಸ್‌ ಚಾಲಕ ಈ ವೇಳೆ ಸಮಯಪ್ರಜ್ಞೆ ಮೆರೆದು ಬಸ್‌ನ್ನು ಎಡ ಭಾಗಕ್ಕೆ ತಿರುಗಿಸಿದ್ದರಿಂದ ಬೈಕ್‌ ಸವಾರ ಎಡಬದಿಗೆ ಬಿದ್ದಿದ್ದಾನೆ. ಇದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಕೈ ಹಾಗೂ ಎಡ ಕಾಲಿಗೆ ಗಂಭೀರ ಗಾಯವಾಗಿದೆ. ಈ ರಸ್ತೆಯಲ್ಲಿ ಬರುತ್ತಿದ್ದ ಕಾರಿಂಜದ ದಿನೇಶ್‌ ಅವರ ಅಟೋ ರಿಕ್ಷಾದಲ್ಲಿ ಗಾಯಾಳುವನ್ನು ತತ್‌ಕ್ಷಣ ಸುಳ್ಯದ ಕೆವಿಜಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದು ದಾಖಲು ಮಾಡಲಾಗಿದೆ.

ಅಪಘಾತದ ರಭಸಕ್ಕೆ ಬೈಕ್‌ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್‌ ಚಾಲಕ ಬಸ್‌ನ್ನು ನಿಧಾನವಾಗಿ ಚಲಾಯಿಸುತ್ತಿದ್ದ ಕಾರಣ ಮತ್ತು ಅಪಘಾತವಾದ ತತ್‌ಕ್ಷಣ ಎಡಕ್ಕೆ ತಿರುಗಿಸಿದ ಪರಿಣಾಮ ಸಂಭಾವ್ಯ ಅನಾಹುತ ತಪ್ಪಿದಂತಾಗಿದೆ.

Leave a Reply

Your email address will not be published. Required fields are marked *

error: Content is protected !!