ಆಟವಾಡುತ್ತಾ ಕೊಳಚೆ ನೀರಲ್ಲಿ ಬಿದ್ದು 4 ವರ್ಷದ ಮಗು ಮೃತ್ಯು
ಬಳ್ಳಾರಿ: ಕೊಳಚೆ ನೀರಲ್ಲಿ ಬಿದ್ದು ಮಗು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬಳ್ಳಾರಿ ಜಿಲ್ಲೆಯ ಕೆ ವೀರಾಪುರ ಗ್ರಾಮದಲ್ಲಿ ನಡೆದಿದೆ
ವೀರಾಪುರ ಗ್ರಾಮದ ಬಸವರಾಜ್ ಹಾಗೂ ಜ್ಯೋತಿ ಅವರ ಸೋಮೇಶ್(4) ಸಾವನ್ನಪ್ಪಿದ ಮಗು.
ಇಂದು ಬೆಳಗ್ಗೆ ಮನೆಯ ಎದುರು ಆಟ ಆಡುತ್ತಾ ಕೊಳಚೆ ನೀರಲ್ಲಿ ಬಿದ್ದಿದೆ. ಮನೆಯ ಮುಂಭಾಗದಲ್ಲಿ ಮಗು ಕಾಣದ ಹಿನ್ನೆಲೆ, ಹುಡುಕಾಟ ನಡೆಸಿದ್ದ ತಾಯಿ. ಕೊನೆಯಲ್ಲಿ ಕೊಳೆಚೆ ನೀರಿನಲ್ಲಿ ಮಗು ಶವವಾಗಿ ಪತ್ತೆಯಾಗಿದೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.




