February 2, 2026

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೈಲಿಗೆ ಸಿಲುಕಿ ರೌಡಿ ಶೀಟರ್ ಸಾವು

0
Screenshot_2022-04-08-04-34-14-71_680d03679600f7af0b4c700c6b270fe7.jpg

ರಾಮನಗರ: ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಗರದ ಹೊರವಲಯದ ಬಸವನಪುರ ಗೇಟ್ ಬಳಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೈಲಿಗೆ ಸಿಲುಕಿ ರೌಡಿ ಶೀಟರ್ ಒಬ್ಬ ಮೃತ ಪಟ್ಟಿದ್ದಾನೆ.

ಬೆಂಗಳೂರು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ದಿಲೀಪ್(28) ಮೃತ ಪಟ್ಟಿರುವ ವ್ಯಕ್ತಿ.

ಎರಡು‌ ಕಾರುಗಳಲ್ಲಿ ಮೈಸೂರಿನಿಂದ ಬೆಂಗಳೂರು ಕಡೆಗೆ ದೀಪಕ್ ಮತ್ತು ಸ್ನೇಹಿತರು ಪ್ರಯಾಣಿಸುತ್ತಿದ್ದರು.

ಅತಿ ವೇಗವಾಗಿ ಚಲಿಸುತ್ತಿದ್ದ ದಿಲೀಪ್ ಇದ್ದ ಕಾರು ರಾಮನಗರ ನಗರ ವ್ಯಾಪ್ತಿಯನ್ನು ದಾಟುವ ವೇಳೆಯೂ ವೇಗ ನಿಯಂತ್ರಿಸಿರಲಿಲ್ಲ.

Leave a Reply

Your email address will not be published. Required fields are marked *

error: Content is protected !!