ಶಾಂತಿಯುತ ಬಂದ್ ಗೆ ತಲಪಾಡಿ ಬದ್ರಿಯಾ ಜುಮಾ ಮಸೀದಿಯ ಆಡಳಿತ ಸಮಿತಿ ಮನವಿ
ತಲಪಾಡಿ: ಹಿಜಾಬ್ ತೀರ್ಪು ವಿರೋಧಿಸಿ ನಾಳೆ ರಾಜ್ಯಾದ್ಯಂತ ಕರೆ ನೀಡಿರುವ ಶಾಂತಿಯುತ ಬಂದ್ ಗೆ ಬೆಂಬಲವಾಗಿ ತಲಪಾಡಿ ಬದ್ರಿಯಾ ಜುಮಾ ಮಸೀದಿಯ ಆಡಳಿತ ಸಮಿತಿಯು ಮದ್ರಸ ಸಂಸ್ಥೆಗೆ ರಜೆ ಘೋಷಿಸಲಾಗಿದೆ ಎಂದು ಮಸೀದಿಯ ಆಡಳಿತ ಸಮಿತಿಯ ಪ್ರಕಟನೆ ತಿಳಿಸಿದೆ.
ಶಾಂತಿಯುತ ಬಂದ್ ಗೆ ಅಲ್ ರಹ್ಮಾ ಫೌಂಡೇಷನ್ ತಲಪಾಡಿ ಸಂಘಟನೆಯೂ ಬೆಂಬಲ ಸೂಚಿಸಿದೆ.
ಅದೇಮಿತ್ತಬೈಲ್ ಜಮಾಅತಿನ ಮತ್ತು ಪರಿಸರದ ಎಲ್ಲಾ ವ್ಯಾಪಾರಸ್ಥರು, ಮದರಸ ಮತ್ತು ಇತರರು ನಾಳೆ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಬೇಕು ಎಂದು ಮಿತ್ತಬೈಲ್ MJM ಕೇಂದ್ರ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.




