ಉಕ್ರೇನ್ ನಿಂದ ದಿಲ್ಲಿ ತಲುಪಿದ ಉಜಿರೆಯ ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ
ಬೆಳ್ತಂಗಡಿ: ಯುದ್ಧಗ್ರಸ್ಥ ಉಕ್ರೇನ್ನ ಖಾರ್ಕಿವ್ ನಲ್ಲಿ ಸಿಲುಕಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆಯ ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರು ಪೋಲಂಡ್ ನಿಂದ ಭಾರತೀಯ ಎಂಬಸಿ ಸಹಾಯಹಸ್ತದಲ್ಲಿ ಇಂದು ದೆಹಲಿಗೆ ಬಂದು ತಲುಪಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಹೀನಾ ಫಾತಿಮಾ ಅವರ ಬರುವಿಕೆಗಾಗಿ ಕಾತುರರಾಗಿದ್ದ ಮನೆಮಂದಿಗೆ ಇದೀಗ ಹರ್ಷ ತಂದಿದೆ. ಹೀನಾ ಫಾತಿಮಾ ಸದ್ಯ ದೆಹಲಿಯಲ್ಲಿ ತಂಗಿದ್ದು, ಇಂದು ಸಂಜೆ 4 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದ್ದು ಅಲ್ಲಿಂದ ಮಂಗಳೂರಿಗೆ ಪ್ರಯಾಣ ಬೆಳೆಸುವ ಮೂಲಕ ತಾಯ್ನಾಡಿಗೆ ಮರಳುವರು.




