ಪೋಲಿಸ್ ಸಬ್ಇನ್ಸ್ ಪೆಕ್ಟರ್ ತರಬೇತಿ ಅವಧಿಯಲ್ಲಿ ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿ ಪಡೆದ ನಿಧಿ ಬಿ.ಎನ್. ಬಂಡಶಾಲೆ ಬಂಟ್ವಾಳ
ಬಂಟ್ವಾಳ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಸಬ್ ಇನ್ಸ್ ಪೆಕ್ಟರ್ ಆಗಿ 2020 ರಲ್ಲಿ ಆಯ್ಕೆಯಾದ ಬಂಟ್ವಾಳ ತಾಲ್ಲೂಕಿನ ಸೊರ್ನಾಡು ಬಂಡಶಾಲೆಯ ಕು॥ನಿಧಿ ಬಿ.ಎನ್. ಕರ್ತವ್ಯದ 11 ತಿಂಗಳ ತರಬೇತಿ ಅವಧಿಯನ್ನು ಕಲಬುರಗಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಪಡೆಯುವ ಸಂದರ್ಭದಲ್ಲಿ ಅತ್ಯುತ್ತಮ ಆಲ್ ರೌಂಡರ್ ಪ್ರಶಸ್ತಿಯನ್ನು ಮತ್ತು ಮಹಿಳಾ ಹೊರಾಂಗಣ ವಿಭಾಗದ ಅತ್ಯುತ್ತಮ ನಿರ್ವಹಣ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಸರಕಾರದ ಗೃಹಮಂತ್ರಿ ಅರಗ ಜ್ಞಾನೇಂದ್ರ ಅವರು ಖಡ್ಗ ಮತ್ತು ಟೋಪಿ ಹಾಗೂ ಪ್ರಶಸ್ತಿ ನೀಡಿ ಶನಿವಾರದಂದು ನಡೆದ ತರಬೇತಿಯ ನಿರ್ಗಮನ ಪಥಸಂಚಲನದಲ್ಲಿ ಗೌರವಿಸಿದರು.
ಕು॥ ನಿಧಿ ಬಿ.ಎನ್. ಬಂಟ್ವಾಳ ಎಸ್ ವಿಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ನಾರಾಯಣ ಭಂಡಾರಿ ಬೊಟ್ಯಾಡಿ ಮತ್ತು ಬಂಟ್ವಾಳ ಬಿಎಸ್ಸೆನ್ನೆಲ್ ನ ನಿವೃತ್ತ ಅಧಿಕಾರಿ ಯಶೋದಾ ದಂಪತಿಯ ಪುತ್ರಿ ಎಸ್.ವಿ.ಎಸ್.ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಏಳನೇ ೦್ಯಾಂಕ್ ನೊಂದಿಗೆ ಪದವಿಯನ್ನು ಪಡೆದಿದ್ದರೆ ಕೆ.ಎ.ಎಸ್.ಪರೀಕ್ಷೆ ಬರೆದಿರುವ ಇವರು ಫಲಿತಾಂಶದ ನಿರೀಕ್ಷೆಯಲ್ಲಿ ಇದ್ದಾರೆ