ಅಳಿಕೆ: ಸತ್ಯ ಸಾಯಿ ಪದವಿ ಪೂರ್ವ ಕಾಲೇಜ್ ನಲ್ಲಿ ವಿಶೇಷ ಕಾರ್ಯಾಗಾರ
ಅಳಿಕೆ ಶ್ರೀ ಸತ್ಯ ಸಾಯಿ ಪದವಿ ಪೂರ್ವ ಕಾಲೇಜು ಅಳಿಕೆ ಇಲ್ಲಿ ಹದಿಹರೆಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಲ್ಲಿ ಉಂಟಾಗುವ ಮಾನಸಿಕ, ಶಾರೀರಿಕ ಬದಲಾವಣೆಗಳು ಹಾಗೂ ಅದನ್ನು ಎದುರಿಸುವುದಕ್ಕಾಗಿ ಇರಬೇಕಾದ ಸಿದ್ಧತೆಗಳ ಬಗ್ಗೆ ವಿಶೇಷ ಕಾರ್ಯಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಶೃತಿ ಶೆಟ್ಟಿ ಆಪ್ತ ಸಮಾಲೋಚಕಿ, ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಇವರು ಭಾಗನಹಿಸಿದ್ದರು. ಪ್ರಾಂಶುಪಾಲ ವೆಂಕಟಕೃಷ್ಣ ಶರ್ಮಾ ಹಾಗೂ ಎಲ್ಲಾ ಉಪನ್ಯಾಸಕಿಯರು ಉಪಸ್ಥಿತರಿದ್ದರು.
ಇವರು ಮಕ್ಕಳ ಕುತೂಹಲಭರಿತವಾದ ಎಲ್ಲಾ ಪ್ರಶ್ನೆಗಳಿಗೂ ಸಮಾಧಾನಕರ ಉತ್ತರವನ್ನಿತ್ತರು.




