July 8, 2026

ಸುಳ್ಯ: ಜೀಪು ಮತ್ತು ಬೈಕ್ ನಡುವೆ ಅಪಘಾತ ಪ್ರಕರಣ: ಗಾಯಗೊಂಡ ಸವಾರ ಮೃತ್ಯು

0
image_editor_output_image966183296-1783495237349

ಸುಳ್ಯ: ಐವರ್ನಾಡಿನ ಪರ್ಲಿಕಜೆ ಪ್ರದೇಶದಲ್ಲಿ ಜುಲೈ 7ರಂದು ರಾತ್ರಿ ಸಂಭವಿಸಿದ್ದ ಜೀಪು ಹಾಗೂ ಬೈಕ್ ನಡುವಿನ ಡಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ಮೃತರನ್ನು ಐವರ್ನಾಡು ಕೃಷಿ ಕಾಲನಿಯ ನಿವಾಸಿ ಚಂದ್ರಶೇಖರ (28) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಶೇಖರ ಅವರನ್ನು ತಕ್ಷಣ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!