ಅಲಂಗಾರು: ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ನದಿಯಲ್ಲಿ ಪತ್ತೆ
ಹಿರಿಯಡಕ: ನಾಪತ್ತೆಯಾಗಿದ್ದ ಪೆರ್ಡೂರು ಗ್ರಾಮದ ಅಲಂಗಾರು ನಿವಾಸಿ ಶ್ರೀಶಾನ್ ಶೆಟ್ಟಿ (15) ಇಂದು ಪೆರ್ಡೂರು ಸಮೀಪದ ಅಲಂಗಾರು ಹೊಳೆಬಾಗಿಲು ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಭಾನುವಾರ ತನ್ನ ಮಿತ್ರನ ಜೊತೆ ಸ್ನಾನಕ್ಕೆಂದು ನದಿಗೆ ಹೋಗಿದ್ದ. ಸ್ನಾನ ಮಾಡುವ ಸಂದರ್ಭ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದ. ಇದರಿಂದ ಭಯಗೊಂಡ ಆತನ ಸ್ನೇಹಿತ ಈ ವಿಚಾರವನ್ನು ಮುಚ್ಚಿಟ್ಟಿದ್ದ. ಮನೆಯವರು ರಾತ್ರಿಯವರೆಗೂ ಹುಡುಕಿದರು ಬಾಲಕ ಪತ್ತೆಯಾಗಲಿಲ್ಲ.




