ಉಡುಪಿ: ದೋಣಿ ಮಗುಚಿ ಓರ್ವ ಮೀನುಗಾರ ಸಾವು
ಉಡುಪಿ: ದೋಣಿ ಮಗುಚಿ ಓರ್ವ ಮೀನುಗಾರ ಸಾವನ್ನಪ್ಪಿದ್ದು, ಇಬ್ಬರು ಸುರಕ್ಷಿತವಾಗಿ ದಡ ಸೇರಿದ ಘಟನೆ ಉಡುಪಿಯ ಸಾಸ್ತಾನ ಕೋಡಿತಲೆ ಬಳಿ ನಿನ್ನೆ (ಆ.22) ನಡೆದಿದೆ.
ಶರತ್ ಸಾವನ್ನಪ್ಪಿದ ವ್ಯಕ್ತಿ. ಅಕ್ಷಯ್ ಖಾರ್ವಿ ಮತ್ತು ಮಂಜುನಾಥ ಖಾರ್ವಿ ಸುರಕ್ಷಿತವಾಗಿ ಸೇರಿದವರಾಗಿದ್ದಾರೆ. ದಡ
ಮೂವರು ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ಎಂದು ತೆರಳಿದ್ದರು. ಈ ವೇಳೆ ಸಮುದ್ರದ ಅಲೆಗಳ ಹೊಡೆತಕ್ಕೆ ದೋಣಿ ಮಗುಚಿ ಬಿದ್ದಿದೆ. ಈ ಪೈಕಿ ಮೂವರಲ್ಲಿ ಇಬ್ಬರು ಈಜಿ ದಡ ಸೇರಿದ್ದು, ಓರ್ವ ದುರಂತದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.




