December 19, 2025

ಮಂಗಳೂರು: ಕೂಳೂರು ಸೇತುವೆ ಬಳಿ ಅಪಘಾತ: ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತ್ತಿದ್ದ ಮಹಿಳೆ ಮೃತ್ಯು

0
image_editor_output_image778399686-1726645436676.jpg

ಮಂಗಳೂರು: ನಿನ್ನೆ ಸಂಜೆ ಕೂಳೂರು ಸೇತುವೆ ಬಳಿ ನಡೆದ ಅಪಘಾತದಲ್ಲಿ ಸಹಸವಾರೆ ಮೃತಪಟ್ಟಘಟನೆ ವರದಿಯಾಗಿದೆ.ಮೃತರನ್ನು ಸುರತ್ಕಲ್ ನಿವಾಸಿ ಶಕೀಲ್ ಸುವರ್ಣ ರವರ ಪತ್ನಿ ಲಾವಣ್ಯ(೨೭) ಎಂದು ಗುರುತಿಸಲಾಗಿದೆ.

ಪಣಂಬೂರಿಂದ ಕಾವೂರು ಕಡೆಗೆ ನಿನ್ನೆ ಸಂಜೆ ಸುಮಾರು 4 ಗಂಟೆಗೆ ಪತಿ ಜೊತೆ ದ್ವಿಚಕ್ರದಲ್ಲಿಪ್ರಯಾಣಿಸುತ್ತಿರುವ ವೇಳೆ ಕೂಳೂರು ಸೇತುವೆಯಲ್ಲಿ ಅತಿ ವೇಗದಿಂದ ಬಂದ ಕಂಟೈನರ್ ಲಾರಿಯೊಂದು ಬಲಭಾಗದಿಂದ ಎಡಭಾಗಕ್ಕೆ ಏಕಾಏಕಿ ಚಲಾಹಿಸಿದ್ದು ಎಡ ಬದಿಯಲ್ಲಿ ಚಲಾಹಿಸುತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಲಾರಿಯ ಹಿಂಬದಿಯ ಚಕ್ರಕ್ಕೆ ಸಹಸವರೇ ಲಾವಣ್ಯ ಸಿಲುಕಿದ್ದು ಚಕ್ರ ತಲೆಯಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪತಿ ಬಲ ಬದಿಗೆ ಬಿದ್ದಿದ್ದು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಸುರತ್ಕಲ್ ಸಂಚಾರಿ ಪೊಲೀಸರು ಭೇಟಿನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!