ಒಡಿಯೂರು ಶ್ರೀಗಳಿಂದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ
ಚಂದ್ರಯಾನ 3 – ಇತಿಹಾಸ ಬರೆದ ಚಂದ್ರನ ಅಂಗಳದಲ್ಲಿ ಇಳಿದ ವಿಕ್ರಮ. ಇದೊಂದು ಐತಿಹಾಸಿಕ ಸಂಭ್ರಮ. ಭಾರತದ ಇತಿಹಾಸದ ಪುಟಗಳಲ್ಲಿ ಸ್ವರ್ಣಾಕ್ಷರಗಳನ್ನು ಮೂಡಿಸಿದ ಕ್ಷಣವಿದು. ವಿಶ್ವವೇ ಭಾರತವನ್ನು ನೋಡುವಂತಾಗಿದೆ. ಇಸ್ರೋ ವಿಜ್ಞಾನಿಗಳಿಂದ ಪ್ರಾಮಾಣಿಕತೆ, ಪರಿಶ್ರಮ, ಆತ್ಮವಿಶ್ವಾಸ ಸಾಕಾರಗೊಂಡಿದೆ. ಭಾರತೀಯರಿಗೆ ಇದೊಂದು ಹೆಮ್ಮೆಯ ವಿಚಾರ” ಎಂದು ಒಡಿಯೂರು ಶ್ರೀ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಇಸ್ರೋ ಸಂಸ್ಥೆಯ ಎಲ್ಲಾ ವಿಜ್ಞಾನಿಗಳನ್ನು ಪ್ರಶಂಸಿಸಿ ಅಭಿನಂದನೆ ತಿಳಿಸಿದ್ದಾರೆ


