ಸುಳ್ಯ ನಗರದ ಬಹುತೇಕ ಮುಸ್ಲಿಂ ಸಮುದಾಯದವರ ವ್ಯಾಪಾರ ಮಳಿಗೆಗಳು ಸ್ವಯಂ ಪ್ರೇರಿತ ಬಂದ್
ಸುಳ್ಯ: ಹಿಜಾಬ್ ಕುರಿತ ಹಿನ್ನೆಲೆಯಲ್ಲಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಬಂದಿರುವ ತೀರ್ಪಿನ ಕುರಿತು, ಅಸಂತುಷ್ಟ ಗೊಂಡಿರುವ ಮುಸ್ಲಿಂ ಸಮುದಾಯದ ವಿವಿಧ ಸಂಘ ಸಂಸ್ಥೆಗಳು ನೀಡಿರುವ ಸ್ವಯಂಪ್ರೇರಿತ ಬಂದ್ ಕರೆಗೆ ಸುಳ್ಯ ನಗರದಲ್ಲಿ ಬಹುತೇಕ ಯಶಸ್ವಿ ಕಂಡಿದೆ.
ಸುಳ್ಯದ ಗಾಂಧಿನಗರ, ಬಾಳೆ ಮಕ್ಕಿ, ಶ್ರೀರಾಮ ಪೇಟ್,ಹಳೆಗೇಟು, ಪೈಚಾರು, ಕುರುಂಜಿಭಾಗ್, ಜೂನಿಯರ್ ಕಾಲೇಜು ರಸ್ತೆ ಸೇರಿದಂತೆ ಹಲವಾರು ಕಡೆಗಳಲ್ಲಿ ಮುಸ್ಲಿಂ ಬಾಂಧವರು ತಮ್ಮ ತಮ್ಮ ವ್ಯಾಪಾರ ಮಳಿಗೆಗಳನ್ನು ಬಂದ್ ಮಾಡಿ ವಿವಿಧ ಸಂಘಟನೆಗಳು ನೀಡಿರುವ ಕರ್ನಾಟಕ ಬಂದಿಗೆ ಬೆಂಬಲವನ್ನು ಸೂಚಿಸಿದ್ದಾರೆ.






